ಜಾರತ್ವವನು ಮಾಡಿದ- ಶ್ರೀ ವ್ಯಾಸರಾಜರು
ಶ್ರೀ ವ್ಯಾಸರಾಜರ ಆರಾಧನಾ ಪ್ರಯುಕ್ತ.
ಉಗಾಭೋಗ: ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ
ರಚನೆ: ಶ್ರೀ ವ್ಯಾಸರಾಜ ತೀರ್ಥರು.
ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ
ಗೋಪೀಜನ ಜಾರನೆಂದರೆ ಸಾಲದೇ
ಚೋರತ್ವವನು ಮಾಡಿದ ಪಾಪಗಳಿಗೆಲ್ಲ
ನವನೀತ ಚೋರನೆಂದರೆ ಸಾಲದೇ
ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ
ಮಾವನ ಕೊಂದವನೆಂದರೆ ಸಾಲದೇ
ಪ್ರತಿ ದಿವಸ ಮಾಡಿದ ಪಾಪಂಗಳಿಗೆಲ್ಲಾ
ಪತಿತ ಪಾವನನೆಂದು ಕರೆದರೆ ಸಾಲದೇ
ಇಂತಿಪ್ಪ ಮಹಿಮೆಗಳನೊಂದನಾದರೂ ಒಮ್ಮೆ
ಸಂತಸದಿ ನೆನೆಯುವರಾ ಸಲಹುವಾ ಶ್ರೀಕೃಷ್ಣಾ .....
*******ಶ್ರೀಕೃಷ್ಣಾರ್ಪಣಮಸ್ತು********
1 comment:
ನೇರ ಹಾಗು ಸರಳ ರಚನೆ
Post a Comment